ಉಡುಪಿ

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ

ಉಡುಪಿ:ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರ ಆಮಂತ್ರಣದಂತೆ ಎಡನೀರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಇಂದು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನ ಪಡೆದರು.

ಶ್ರೀಪಾದರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪರ್ಯಾಯ ಶ್ರೀಪಾದರು ಹಿಂದೂ ಸಮಾಜದ ರಕ್ಷ್ಮಣೆಯಲ್ಲಿ ಎಡನೀರು ಮಠದ ಕೊಡುಗೆಯನ್ನು ನೆನಪಿಸುತ್ತಾ ಹಿಂದಿನಿಂದಲೂ ಅಷ್ಟ ಮಠದ ಜೊತೆಗಿರುವ ಮಧುರ ಬಾಂಧವ್ಯವನ್ನು ಸ್ಮರಿಸಿಕೊಂಡು ಹೀಗೆಯೇ ಮುಂದುವರಿಯಲಿ ಎಂದು ಕಿರಿಯ ಶ್ರೀಪಾದರ ಜೊತೆಗೂಡಿ ಆಶಿಸಿದರು.

ಶ್ರೀ ಮಠದಿಂದ ಸಾಂಪ್ರದಾಯಿಕ ಗೌರವವನ್ನು ಅರ್ಪಿಸಲಾಯಿತು.

ಪರ್ಯಾಯ ಶ್ರೀಪಾದರೊಡನೆ ಗೀತಮಂದಿರ ದರ್ಶನವನ್ನು ಪಡೆದು ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದ ಬೃಹತ್ ಅಭಿಯಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Related posts

ಉಡುಪಿ‌ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ

Udupilive News

ದೀಪಾವಳಿಯ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಗೂಡು ದೀಪ ಸ್ಪರ್ಧೆ.

Udupilive News

ಜನಸಾಮಾನ್ಯರ ಕೆಲಸಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಿ : ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಮೀ ಆರ್ ಹೆಬ್ಬಾಳಕರ್

Udupilive News

Leave a Comment