ಉಡುಪಿ

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ

ಉಡುಪಿ:ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರ ಆಮಂತ್ರಣದಂತೆ ಎಡನೀರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಇಂದು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನ ಪಡೆದರು.

ಶ್ರೀಪಾದರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪರ್ಯಾಯ ಶ್ರೀಪಾದರು ಹಿಂದೂ ಸಮಾಜದ ರಕ್ಷ್ಮಣೆಯಲ್ಲಿ ಎಡನೀರು ಮಠದ ಕೊಡುಗೆಯನ್ನು ನೆನಪಿಸುತ್ತಾ ಹಿಂದಿನಿಂದಲೂ ಅಷ್ಟ ಮಠದ ಜೊತೆಗಿರುವ ಮಧುರ ಬಾಂಧವ್ಯವನ್ನು ಸ್ಮರಿಸಿಕೊಂಡು ಹೀಗೆಯೇ ಮುಂದುವರಿಯಲಿ ಎಂದು ಕಿರಿಯ ಶ್ರೀಪಾದರ ಜೊತೆಗೂಡಿ ಆಶಿಸಿದರು.

ಶ್ರೀ ಮಠದಿಂದ ಸಾಂಪ್ರದಾಯಿಕ ಗೌರವವನ್ನು ಅರ್ಪಿಸಲಾಯಿತು.

ಪರ್ಯಾಯ ಶ್ರೀಪಾದರೊಡನೆ ಗೀತಮಂದಿರ ದರ್ಶನವನ್ನು ಪಡೆದು ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದ ಬೃಹತ್ ಅಭಿಯಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Related posts

ದುಬೈನ ಫಾರ್ಚ್ಯೂನ್ ಸಂಸ್ಥೆಗೆ 2.5 ಕೋಟಿ ವಂಚಿಸಿ‌ ಬಂಧನಕ್ಕೊಳಗಾಗಿದ್ದ ಆರೋಪಿಯ ಜಾಮೀನು ಅರ್ಜಿ ತಿರಸ್ಕೃತ

Udupilive News

ಪ್ರಚೋದನಕಾರಿ ಹೇಳಿಕೆ ಶರಣ್ ಪಂಪ್ ವೆಲ್ ವಿರುದ್ದ ಕೇಸ್.

Udupilive News

ರಸ್ತೆ ಹೊಂಡ ಮಧ್ಯೆ ಬಾಳೆ ಗಿಡ ಇಟ್ಟು ಆಕ್ರೋಶ.ಶಿರ್ವ ಕಟಪಾಡಿ ರಸ್ತೆ ದುರವಸ್ಥೆಗೆ ಬೇಸತ್ತ ಜನ.

Udupilive News

Leave a Comment