ಉಡುಪಿಕಾಪು

ಶ್ರೀ ಕೃಷ್ಣ ಮಠಕ್ಕೆ ಅಗಮಿಸಿದ ಯೋಗಗುರು ಬಾಬಾರಾಮ್ ದೇವ್ ಜೀಗೆ ಪೂರ್ಣಕುಂಭ ಸ್ವಾಗತ

ಶ್ರೀ ಕೃಷ್ಣ ಮಠಕ್ಕೆ ಯೋಗಋಷಿ ಸ್ವಾಮಿ ರಾಮದೇವ್ ಜೀ ಮಹಾರಾಜ್ ರವರು ಭೇಟಿ ನೀಡಿದರು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಪೂರ್ಣಕುಂಭ ಸ್ವಾಗತ ಮಾಡಿ, ಬಾಬಾ ರಾಮದೇವ್ ರವರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣ ಹಾಗೂ ಗರುಡ ದೇವರ ದರ್ಶನ ಮಾಡಿಸಿ ಶ್ರೀ ಕೃಷ್ಣನ ಪ್ರಸಾದ ನೀಡಿದರು.ಗೀತಾನಂದಿರಕ್ಕೆ ಭೇಟಿ ನೀಡಿ ಪುತ್ತಿಗೆ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಹೊಂದಿದರು. ಇದೇ ಸಂದರ್ಭದಲ್ಲಿ ಪತಂಜಲಿಯ ಬಾಲಕೃಷ್ಣ ಆಚಾರ್ಯ ಇವರು, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು.

Related posts

ಕರ್ನಾಟಕ ಪಾಲಿಟೆಕ್ನಿಕ್ ನಿವೃತ್ತ ಸಿಬ್ಬಂದಿ ಎ.ಮಾಧವ ಪೂಜಾರಿ ಅಂಬಲಪಾಡಿ ನಿಧನ

Udupilive News

ಗೃಹಲಕ್ಷ್ನಿ ಹಣದಿಂದ ಕವಾಟು ಖರೀದಿಸಿ ಫೋಟೊ ಹಂಚಿಕೊಂಡ ಮಹಿಳೆ

Udupilive News

ಜುಲೈ 4, 5 ಮತ್ತು 6 ರಂದು ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳ

Udupilive News

Leave a Comment