ಉಡುಪಿ

ಶ್ರಮಿಕ ತರುಣರ ತಂಡ ಸಂಘಟನೆಯಿಂದ ಸಮವಸ್ತ್ರ ವಿತರಣೆ

.

ಪೆರ್ಡೂರು: ಶ್ರಮಿಕ ತರುಣರ ತಂಡ ಸಂಘಟನೆ ವತಿಯಿಂದ 41 ನೇ ಶಿರೂರು ನ್ಯೂ ಕಲ್ಲಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಸಂತೋಷ್ ಕುಮಾರ್ ಬೈರಂಪಳ್ಳಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.ಕಳೆದ ಹಲವಾರು ವರ್ಷಗಳಿಂದ ಉಡುಪಿ ಜಿಲ್ಲಾ ಮಟ್ಟದಲ್ಲಿ ದುರ್ಬಲ ವರ್ಗದ ಜನರಿಗೆ ಸಹಾಯ ಹಸ್ತದೊಂದಿಗೆ ವಿವಿಧ ರೀತಿಯಲ್ಲಿ ಈ ಸಂಘಟನೆ ನೆರವನ್ನು ನೀಡುತ್ತಿದೆ.

ಹಲವಾರು ಯುವಕ ಯುವತಿಯರು ಸೇರಿಕೊಂಡು ಸಮಾಜದ ಬಡ ವರ್ಗದ ಜನರಿಗೆ ಡಾ ಸಂತೋಷ್ ಕುಮಾರ್ ಬೈರಂಪಳ್ಳಿಯವರ ನೇತೃತ್ವದಲ್ಲಿ ಸೂರು ನಿರ್ಮಾಣ ಕಾರ್ಯದಿಂದ ಪ್ರಾರಂಭಗೊಂಡು ಈಗ ಜನ ಮಾನಸದಲ್ಲಿ ನೂರಾರು ಸೇವಾಕಾರ್ಯದಿಂದ ಶ್ರಮಿಕರು ಪ್ರೀತಿಯ ವಿಶ್ವಾಸದ ಚಾಪನ್ನು ಮೂಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಸದಾಶಿವ ಶೆಟ್ಟಿ, ಶಾಲಾ SDMC ಅಧ್ಯಕ್ಷರು ಮಂಜುಳಾ ತಂಡದ ಗೌರವಾಧ್ಯಕ್ಷರಾದ ರಘುನಾಥ ಪೂಜಾರಿ, ಉಪಾದ್ಯಕ್ಷರಾದ ಸಂದೀಪ್ ಪೂಜಾರಿ ಮಹಿಳಾ ಘಟಕದ ಅಧ್ಯಕ್ಷರು ಸಂಪ ಪೂಜಾರಿ,ಉಪಾದ್ಯಕ್ಷರಾದ ಶಶಿಕಲಾ ಪೂಜಾರಿ, ಪ್ರ ಕಾರ್ಯದರ್ಶಿ ಕವಿತಾ ಉದಯ್ ಸದಸ್ಯರು ಸುಗಂಧಿ ಪೂಜಾರಿ ,ವಿಜಯ್ ಕುಮಾರ್ ಪ್ರವೀಣ್ ಕುಮಾರ್, ಶಾಲಾ ಶಿಕ್ಷಕ ವೃಂದ, ಪುಟಾಣಿ ಮಕ್ಕಳು ಮತ್ತು ಗ್ರಾಮಸ್ಥರು ಉಪಸಿತರಿದ್ದರು

Related posts

ಅಮರವೀರ ಗೀತ ಗಾಯನ ಸ್ಪರ್ಧೆ-ಬಹುಮಾನ ವಿತರಣೆ, ಸನ್ಮಾನ

Udupilive News

ಜನಸಾಮಾನ್ಯರ ಕೆಲಸಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಿ : ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಮೀ ಆರ್ ಹೆಬ್ಬಾಳಕರ್

Udupilive News

ಕಾರ್ಕಳ: ಕರಿಮಣಿ ಮಾಲೀಕ ನೀನಲ್ಲ ಅಂತಾ ಗಂಡನ ಜೊತೆ ರೀಲ್ಸ್  ಮಾಡಿದವಳು ,ಬಾಯ್ ಫ್ರೆಂಡ್ ಜೊತೆ ಸೇರಿ  ಕೊಂದೇ ಬಿಟ್ಟಳು.

Udupilive News

Leave a Comment