ಉಡುಪಿ

ಉಡುಪಿ: ನೀಟ್ ಸಾಧಕರಿಗೆ ಸನ್ಮಾನ

ಉಡುಪಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಇರುವ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್)ನಲ್ಲಿ ಉಡುಪಿ ಜಿಲ್ಲೆಗೆ ಅಗ್ರಸ್ಥಾನ ಗಳಿಸಿದ ಸಲ್ಮಾನ್ ಅಲಿ ಮತ್ತು ಶ್ರೀಹರಿ ಅವರನ್ನು ಇಲ್ಲಿನ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‍ಎಲ್) ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.

ಸಲ್ಮಾನ್ ಅಲಿ ಅಖಿಲ ಭಾರತ ಮಟ್ಟದಲ್ಲಿ 1036 (ವರ್ಗದಲ್ಲಿ 313ನೇ ರ್ಯಾಂಕ್) ಗಳಿಸಿದ್ದು, ಶ್ರೀಹರಿ ಅಖಿಲ ಭಾರತ ಮಟ್ಟದಲ್ಲಿ 3104ನೇ ರ್ಯಾಂಕ್ ಪಡೆದಿದ್ದಾರೆ. ಈ ಅಸಾಧಾರಣ ಸಾಧನೆಯು ವಿದ್ಯಾರ್ಥಿಗಳ ಸಮರ್ಪಣೆ, ಶೈಕ್ಷಣಿಕ ಶಿಸ್ತು ಮತ್ತು ಎಇಎಸ್‍ಎಲ್ ಒದಗಿಸಿದ ವಿಶ್ವ ದರ್ಜೆಯ ತರಬೇತಿ ಮತ್ತು ಮಾರ್ಗದರ್ಶನಕ್ಕೆ ಸಾಕ್ಷಿಯಾಗಿದೆ ಎಂದು ಸನ್ಮಾನ ನೆರವೇರಿಸಿದ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಶ್ಯಾಮ್‍ಪ್ರಸಾದ್ ಹೇಳಿದರು.

ವಿದ್ಯಾರ್ಥಿಯು ತನ್ನ ಯಶಸ್ಸಿಗೆ ಎಇಎಸ್‍ಎಲ್ ಹಾಕಿದ ಬಲವಾದ ಶೈಕ್ಷಣಿಕ ಅಡಿಪಾಯ, ಅವರ ಪರಿಕಲ್ಪನಾ ಸ್ಪಷ್ಟತೆ ಮತ್ತು ಸ್ಥಿರ ಮತ್ತು ಶಿಸ್ತಿನ ಅಧ್ಯಯನ ದಿನಚರಿ ಕಾರಣ ಎಂದು ಹೇಳಿದರು.

“ಈ ಪ್ರಯಾಣದುದ್ದಕ್ಕೂ ನನಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನಾನು ಆಕಾಶ್‍ಗೆ ತುಂಬಾ ಕೃತಜ್ಞನಾಗಿದ್ದೇನೆ. ರಚನಾತ್ಮಕ ವಿಷಯ, ತಜ್ಞರ ಬೋಧನೆ ಮತ್ತು ವೈಯಕ್ತಿಕ ಮಾರ್ಗದರ್ಶನವು ಕಡಿಮೆ ಸಮಯದಲ್ಲಿ ಸಂಕೀರ್ಣ ವಿಷಯಗಳನ್ನು ಕರಗತ ಮಾಡಿಕೊಳ್ಳಲು ನನಗೆ ಸಹಾಯ ಮಾಡಿತು. ಂಇSಐ ಇಲ್ಲದಿದ್ದರೆ, ಈ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ” ಎಂದು ಅಲಿ ಅಭಿಪ್ರಾಯಪಟ್ಟರು. ಎಇಎಸ್‍ಎಲ್ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ವಿದ್ಯಾರ್ಥಿ ಸಾಧಕರನ್ನು ಅಭಿನಂದಿಸಿದರು.

ಉಡುಪಿ ಕೇಂದ್ರದ ಮುಖ್ಯಸ್ಥ ಪರಮೇಶ್ವರ್, ಶೈಕ್ಷಣಿಕ ಮುಖ್ಯಸ್ಥ ಪ್ರದೀಪ್ ಸಾಮಗ ಮತ್ತಿತರರು ಉಪಸ್ಥಿತರಿದ್ದರು.
ಸಾಧನೆ: ರಾಷ್ಟ್ರಾದ್ಯಂತ ಪ್ರಥಮ 100 ರ್ಯಾಂಕ್‍ಗಳ ಪೈಕಿ ಆಕಾಶ್ ವಿದ್ಯಾರ್ಥಿಗಳು 12 ಮಂದಿ ಇದ್ದು ಉತ್ತಮ ಸಾಧನೆ ತೋರಿದ್ದಾರೆ. ಸಿಇಟಿಯಲ್ಲಿ 18ನೇ ರ್ಯಾಂಕ್ ಪಡೆದಿದ್ದು, ಒಟ್ಟು 60 ಮಂದಿ 500ಕ್ಕಿಂತ ಕಡಿಮೆ ರ್ಯಾಂಕ್ ಪಡೆದಿದ್ದಾರೆ. ಜೆಇಇ ಮೈನ್ಸ್‍ನಲ್ಲಿ ಅಗ್ರ 10 ರ್ಯಾಂಕ್‍ಗಳ ಪೈಕಿ ಐದು ಆಕಾಶ್ ವಿದ್ಯಾರ್ಥಿಗಳ ಪಾಲಾಗಿದೆ ಎಂದು ಶ್ಯಾಂಪ್ರಸಾದ್ ವಿವರಿಸಿದರು.
ಉಡುಪಿ ಕೇಂದ್ರದಿಂದ ನೀಟ್ ಪರೀಕ್ಷೆ ತೆಗೆದುಕೊಂಡಿದ್ದ 80 ಮಂದಿಯ ಪೈಕಿ 20 ಮಂದಿ ಎಂಬಿಬಿಎಸ್ ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆ. ಶೇಕಡ 40ರಷ್ಟು ವಿದ್ಯಾರ್ಥಿಗಳು ಬಿಡಿಎಸ್ ಮತ್ತು ಬಿಎಎಂಎಸ್ ಕೋರ್ಸ್‍ಗಳಿಎ ಪ್ರವೇಶ ಪಡೆಯಲಿದ್ದಾರೆ ಎಂದರು.

Related posts

ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಇದ್ರಿಸ್ ಹೂಡೆ ಅಯ್ಕೆ

Udupilive News

ಹೊಸಂಗಡಿ: ಅಕ್ರಮ‌ ಗೋಸಾಗಾಟಗರರನ್ನು ಬಂಧಿಸಿದ ಪೊಲೀಸರು.

Udupilive News

ಜಡ್ಕಲ್ – ಮುದೂರು: ಕಸ್ತೂರಿ ರಂಗನ್ ವರದಿಗೆ ವಿರೋಧ – ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ, ಸಂವಾದ

Udupilive News

Leave a Comment