ಕುಂದಾಪುರಬೈಂದೂರುಬ್ರಹ್ಮಾವರ

ಮಾಬುಕಳ| ಅಪರಿಚಿತ ವಾಹನ ಡಿಕ್ಕಿ – ಪಾದಚಾರಿ ಸ್ಥಳದಲ್ಲೇ ಸಾವು!

ಕೋಟ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಚಾರಿ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ಮಾಬುಕಳ ಐರೊಡಿ ಪಂಚಾಯತ್ ಎದುರುಗಡೆ ಸಂಭವಿಸಿದೆ.

ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.
ಸುಮಾರು 35 ವರ್ಷದ ಯುವಕ ಎಂದು ಗುರುತಿಸಲಾಗಿದೆ.
ವ್ಯಕ್ತಿಯ ತಲೆಯ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ವ್ಯಕ್ತಿಯ ಗುರುತು ಪತ್ತೆ ಹಾಗೂ ವ್ಯಕ್ತಿಯ ಮೇಲೆ ಹರಿದ ವಾಹನದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ
ಬ್ರಹ್ಮಾವರ ಶವಗಾರಕ್ಕೆ ಸಾಗಿಸಿರುತ್ತಾರೆ.

Related posts

ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರಾಗಿ ಸುಧರ್ಶನ್ ಪೂಜಾರಿ

Udupilive News

ಕೊಲ್ಲೂರು ಮೂಕಾಂಬಿಕೆ ದರುಶನ ಪಡೆದ  ತಮಿಳು ಸ್ಟಾರ್ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ .ಚಾಂಡಿಕಾ ಯಾಗದಲ್ಲಿ‌ ಭಾಗಿ

Udupilive News

ಕುಂದಾಪುರ| ವಿವಾಹಿತ ಮಹಿಳೆ ನಾಪತ್ತೆ – ಸ್ಕೂಟರ್, ಚಪ್ಪಲಿ ಸೇತುವೆ ಮೇಲೆ ಪತ್ತೆ! ದೂರು ದಾಖಲು

Udupilive News

Leave a Comment