ಬೈಂದೂರು

ಬೈಂದೂರಿಗೆ ಬಂದ ಬಾಹುಬಲಿ ವಿಗ್ರಹ

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶ್ರೀ ಬೋಳಂಬಳ್ಳಿ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ಮೂರ್ತಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು ಬೈಂದೂರಿಗೆ ವಿಗ್ರಹವನ್ನು ತರಲಾಯ್ತು. ಬೈಂದೂರು ಕಂಬದಕೋಣೆ ಜಂಕ್ಷನ್ ನಲ್ಲಿ ಬಾಹುಬಲಿಯ ಮೂರ್ತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು.

ಬೋಳಂಬಳ್ಳಿವರೆಗೆ ಅದ್ಧೂರಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದೆ. ಮೂರ್ತಿಯ ಫಿನಿಶಿಂಗ್ ಮತ್ತು ಪೀಠದ ಕೆತ್ತನೆ ಇನ್ನುಮುಂದೆ ನಡೆಯಲಿದೆ ಎಂದು ಬೋಳಂಬಳ್ಳಿ ಕ್ಷೇತ್ರದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

Related posts

ಕುಂದಾಪುರ| ವಿವಾಹಿತ ಮಹಿಳೆ ನಾಪತ್ತೆ – ಸ್ಕೂಟರ್, ಚಪ್ಪಲಿ ಸೇತುವೆ ಮೇಲೆ ಪತ್ತೆ! ದೂರು ದಾಖಲು

Udupilive News

ಅಪ್ರೆಂಟಿಸ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

Udupilive News

ಉಡುಪಿ: ಕಾರಿನ ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು

Udupilive News

Leave a Comment