ಉಡುಪಿ

ಸಹಕಾರ ಭಾರತಿ,ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ದಿನೇಶ್ ಹೆಗ್ಡೆ ಆತ್ರಾಡಿ ಆಯ್ಕೆ.

ಉಡುಪಿ: ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಹಕಾರಿ ಸಂಘಟನೆಯಾದ ಸಹಕಾರ ಭಾರತಿಯ ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ದಿನೇಶ್ ಹೆಗ್ಡೆ ಆತ್ರಾಡಿ ರವರು ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಹಂಸ ಚೈತನ್ಯ ಸೊಸೈಟಿಯ ಅಧ್ಯಕ್ಷರಾದ ಸುದೀಶ್ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಸುಜಿತ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ದಿನಪಾಲ್ ಶೆಟ್ಟಿ, ಹರೀಶ್ ಕಲ್ಯ, ಅಶೋಕ್ ಪ್ರಭು ಬ್ರಹ್ಮಾವರ, ಭೋಜ ಪೂಜಾರಿ ಹೆಬ್ರಿ,ಆಶಾ ಹೆಗ್ಡೆ ಬ್ರಹ್ಮಾವರ ಆಯ್ಕೆಯಾಗಿದ್ದಾರೆ.ಪ್ರಸಾದ್ ಶೆಟ್ಟಿ ಕುತ್ಯಾರು ಮಹಿಳಾ ಪ್ರಮುಖರಾಗಿ ವಿಜೇತಾ ಪೈ ಅಜೆಕಾರು, ಸಹ ಪ್ರಮುಖರಾಗಿ ಸ್ಮಿತಾ ಶೆಟ್ಟಿ ನಿಯುಕ್ತಿ ಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್, ರೋಹಿತ್, ಸುದರ್ಶನ್. ರಾಜ್ಯ ಸಹಕಾರ ಭಾರತಿ ಯ ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನದಾಸ ನಾಯಕ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಮಂಜುನಾಥ ,ನಿಕಟ ಪೂರ್ವ ಅಧ್ಯಕ್ಷ ಶ್ರೀ ಬೋಳಾ ಸದಾಶಿವ ಶೆಟ್ಟಿ ಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹಿರಿಯ ಸಹಕಾರಿ , ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಶ್ರೀ ಸತೀಶ್ಚಂದ್ರ ಎಸ್ ಆರ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.

Related posts

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ ಕೆ ಅಧಿಕಾರ ಸ್ವೀಕಾರ

Udupilive News

ಇಂದ್ರಾಳಿ ಸೇತುವೆ ಕಾಮಗಾರಿ ವೇಳೆ. ತಲೆಕೆಳಗಾಗಿ ಬಿದ್ದ ಕ್ರೇನ್.

Udupilive News

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯ ಸಂಘದ “ಶತಾಭಿವಂದನಂ “ಆಚರಣೆ ಸಮಾರೋಪ ಸಂಭ್ರಮ

Udupilive News

Leave a Comment