ಉಡುಪಿ: ಇಂದು ದೇಶಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ಧೌರ್ಜನ್ಯ ತಡೆಗಟ್ಟಲು ಮತ್ತು ದಲಿತರ ಮೇಲಿನ ಧೌರ್ಜನ್ಯ ಕ್ಕೆ ಶೀಘ್ರ ಇತ್ಯರ್ಥಕಂಡುಕೊಳ್ಳುವಂತಾಗಲು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ದಲಿತ ಧೌರ್ಜನ್ಯ ಕೇಸಿಗೆ ವಿಶೇಷ ಪತ್ಯೇಕ ಪೋಲಿಸ್ ಠಾಣೆಗಳನ್ನು ತೆರೆಯಬೇಕೆಂದು ಒತ್ತಾಯಿಸಿ ಇಂದು ತಾರೀಖು 23 – 10 -2024 ರಂದು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯ ಮಂತ್ರಿ ಸಿಧ್ಧರಾಮಯ್ಯ ರವರಿಗೆ ಮನವಿ ಸಲ್ಲಿಸಲಾಯಿತು.
ಅದರಂತೆ ಇಂದು ಉಡುಪಿ ಜಿಲ್ಲೆಯಲ್ಲೂ ಅಪರ ಜಿಲ್ಲಾಧಿಕಾರಿಯವರಿಗೆ ದ.ಸಂ.ಸ.ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ನೇತೃತ್ವದಲ್ಲಿ ದ.ಸಂ.ಸ. ನಿಯೋಗ ಮನವಿ ಸಲ್ಲಿಸಲಾಯಿತು.
ದ.ಸಂ.ಸ.ಜಿಲ್ಲಾ ಮುಖಂಡರಾದ ಮಂಜುನಾಥ ಗಿಳಿಯಾರು , ಶ್ಯಾಮಸುಂದರ ತೆಕ್ಕಟ್ಟೆ , ಸುರೇಶ ಹಕ್ಲಾಡಿ , ಫ್ರೋಪೇಸರ್ ಫಣಿರಾಜ್ , ಇದ್ರಿಸ್ ಹೂಡೆ , ಕುಮಾರ್ ಕೋಟಾ , ಕೀರ್ತಿ ಪಡುಬಿದ್ರಿ , ಶಿವಾನಂದ ಮೂಡುಬೆಟ್ಟು , ಸುರೇಶ ಬಾರ್ಕೂರು , ವಿಠಲ ತೊಟ್ಟಂ , ಗೋಪಾಲಕೃಷ್ಣ ನಾಡ , ವಿಠಲ ಕೊಡಂಕೂರು ಉಪಸ್ಥಿತರಿದ್ದರು.