ಉಡುಪಿ

ಉಡುಪಿ: ರೈಲ್ವೇ ನಿಲ್ದಾಣಕ್ಕೆ ವ್ಹೀಲ್ ಚೇರ್ ಗಳ ಕೊಡುಗೆ

ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು ಉಡುಪಿ ರೈಲ್ವೆ ಯಾತ್ರಿ ಸಂಘ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ನಿಲ್ದಾಣದಲ್ಲಿ ಅಶಕ್ತ ಪ್ರಯಾಣಿಕರ ಸೌಲಭ್ಯತೆಗಾಗಿ ವೀಲ್ ಚಯರ್ ಗಳನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸೊಸೈಟಿಯ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಅವರು ವೀಲ್ ಚಯರ್ ಗಳನ್ನು ಸಾಂಕೇತಿಕವಾಗಿ ಸ್ಟೇಷನ್ ಮಾಸ್ಟರ್ ನಾಗರಾಜ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಸೊಸೈಟಿಯ ಮಹಾ ಪ್ರಬಂಧಕ ರಾಜೇಶ್ ಹೆಗ್ದೆ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷರಾದ ಧೀರಜ್ ಶಾಂತಿ, ಉಪಾಧ್ಯಕ್ಷರಾದ ಮಧುಸೂದನ್ ಹೇರೂರು, ನಿರ್ದೇಶಕರುಗಳಾದ ತೊನ್ಸೆ ಶ್ರೀನಿವಾಸ್ ಶೆಟ್ಟಿ, ಜಾನ್ ರೆಬೆಲ್ಲೊ, ಜನಾರ್ಧನ್ ಕೋಟ್ಯಾನ್, ರವಿ ಪೂಜಾರಿ ಹಿರಿಯಡ್ಕ, ರವೀಶ್ ಕೋಟ್ಯಾನ್, ರೈಲ್ವೆ ಕಮರ್ಷಿಯಲ್ ಇನ್ ಚಾರ್ಜ್ ಸತ್ಯನಾರಾಯಣ ಭಟ್, ಮತ್ತಿತರರು ಹಾಜರಿದ್ದರು. ಮಂಜುನಾಥ್ ಮಣಿಪಾಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Related posts

ಕರಾವಳಿ ಜಿಲ್ಲೆಗಳಲ್ಲಿ ಡ್ರಗ್ಸ್, ಕಾನೂನು ಬಾಹಿರ ಚಟುವಟಿಕೆ ತಡೆಯಲು ಶಾಸಕ ಮಂಜುನಾಥ್ ಭಂಡಾರಿ ಒತ್ತಾಯ

Udupilive News

ಅಂಗವಿಕಲರ ಕಲ್ಯಾಣಕ್ಕಾಗಿ ಜೀವನವನ್ನೇ ಮೂಡಿಪಾಗಿಟ್ಟಿರುವ ಜಗದೀಶ್ ಭಟ್ ಬಗ್ಗೆ ನಿಮಗೆಷ್ಟು ಗೊತ್ತು..?

Udupilive News

ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡದ ತಾಮ್ರದ ಪೈಪ್‌ ಕದ್ದ ಆರೋಪಿಗಳು ಅರೆಸ್ಟ್.

Udupilive News

Leave a Comment