ಉಡುಪಿ

ಶಾಂತಿ ಸೌಹರ್ದೆತೆ ತವರೂರಲ್ಲಿ ಬೆಂಕಿ ಹಚ್ಚೋ ಕೆಲಸ ಮಾಡದಿರಿ.ಶರಣ್ ಪಂಪ್ ವೆಲ್ ವಿರುದ್ದ ಕಿಡಿ ಕಾರಿದ ಪ್ರಸಾದ್ ರಾಜ್ ಕಾಂಚನ್.

ಉಡುಪಿ: ಬ್ರಹ್ಮಾವರದ ಕುಂಜಾಲುವಿನಲ್ಲಿ ನಡೆದಿರುವ ದನದ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಭಂಧಿಸಿ ಹಿಂದೂ ಸಂಘಟನೆ ಮುಖಂಡ ಶರಣ್ ಪಂಪ್ ವೆಲ್ ನೀಡಿರುವ ಹೇಳಿಕೆಗಳಿಗೆ ಉಡುಪಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣಕ್ಕೆ ಸಂಭಂಧಿಸಿದಂತೆ ಉಡುಪಿ ಎಸ್ ಪಿ ನೇತೃತ್ವದ ಪೊಲೀಸರ ತಂಡ ಅರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಅದರೆ ಸಮಾಜದಲ್ಲಿ ಆಶಾಂತಿಯನ್ನೇ ಬಯಸುವ ಕಿಡಿಗೇಡಿಗಳು ಮತ್ತೆ ಮತ್ತೆ ಅದೇ ವಿಚಾರದಲ್ಲಿ ಕೋಮು ಸೌಹರ್ದ ಕೆಡಿಸುವ ಕಾರ್ಯಕ್ಕೆ ಕೈ ಹಾಕಿರುವುದು ಶೋಚನೀಯ.

ಈ ಪ್ರಕರಣದಲ್ಲಿ ಹಲವು ಮಂದಿ ಬಂಧಿತರಾಗಿದ್ದರೂ ಕೂಡ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಜಿಲ್ಲೆಯಲ್ಲಿ ಆಶಾಂತಿ ಸೃಷ್ಟಿ ಮಾಡುವ ದೃಷ್ಟಿಯಲ್ಲಿ ಉಡುಪಿಗೆ ಅಗಮಿಸಿ ಅನಗತ್ಯ ಗೊಂದಲ ಹಾಗೂ ಕೋಮು ದ್ವೇಷಿ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲೆ ಸುರಕ್ಷಿತ ಹಾಗೂ ಪ್ರಜ್ಞಾವಂತರ ಜಿಲ್ಲೆ.ಇಲ್ಲಿನ ಜನ ಶಾಂತಿ ನೆಮ್ಮದಿಯನ್ನು ಬಯಸುತ್ತಾರೆ.ಅದರೆ ದಕ್ಷಿಣ ಕನ್ನಡದಲ್ಲಿ ಕೋಮು ದ್ವೇಷಗಳನ್ನು ಹರಡಿಸಿ ಶಾಂತಿ ಕದಡಿಸಿದ ಶರಣ್ ಪಂಪ್ ವೆಲ್ ಈಗ ಉಡುಪಿ ಜಿಲ್ಲೆಯಲ್ಲಿ ಕೋಮು ಸೌಹರ್ದ ಕೆಡಿಸಲು ತೊಡಗೊಸಿದ್ದು ಇದಕ್ಕೆ ಉಡುಪಿ ಜಿಲ್ಲೆ ಜನ ಬೆಂಬಲಿಸುವಿದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೋಮು ದ್ವೇಶ ಹರಡಿಸಿ ದಾಂಧಲೆ ಹಬ್ಬಿಸುವವರ ವಿರುದ್ದ ಕೋಮು ಹಿಂಸೆ ನಿಗ್ರಹ ದಳ ರಚನೆ ಮಾಡಿದೆ.ಈ ಕಾನೂನಿನ ಅಡಿಯಲಿಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಶರಣ್ ಪಂಪ್ ವೆಲ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ,ಜಿಲ್ಲೆಯಲ್ಲಿ ಶಾಂತಿ‌ ಸೌರ್ಹದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಿ ಎಂದು ಆಗ್ರಹಿಸಿದರು.

Related posts

ಮಗುವಿನ ಮೇಲೆ ದೌರ್ಜನ್ಯ ಎಸಗಿದ ಅರೋಪಿಯಿಂದ ಪೊಲೀಸರ ಮೇಲೆ ಅಟ್ಯಾಕ್

Udupilive News

ಡಿಎಸ್ ಎಸ್ ನಿಯೋಗದಿಂದ ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ- ಬೇಡಿಕೆ ಈಡೇರುಸುವಂತೆ ಒತ್ತಾಯ

Udupilive News

ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

Udupilive News

Leave a Comment